Loader..
BEWARE OF FRAUDSTERS: WE HAVE NOT INVITED ANY REQUESTS FOR DEALERSHIP/FRANCHISE. DO NOT TRUST ANYONE OFFERING SUCH A FACILITY AND SEEKING MONEY IN IFFCO’S NAME.
Start Talking
Listening voice...
IFFCO kick starts one of India’s largest nationwide tree plantation campaign IFFCO kick starts one of India’s largest nationwide tree plantation campaign

ಪತ್ರಿಕಾ ಬಿಡುಗಡೆಗಳು

ದೇಶಾದ್ಯಂತ ಸಹಯೋಗದ ಸಂಶೋಧನೆ, ಪರೀಕ್ಷೆ ಮತ್ತು ವಿಸ್ತರಣಾ ಕಾರ್ಯಕ್ರಮಗಳಿಗಾಗಿ IFFCO ಸಂಸ್ಥೆಯು ICAR ನೊಂದಿಗೆ MOU ಗೆ ಸಹಿ ಹಾಕಿದೆ

ಆವಿಷ್ಕಾರಗಳಿಗೆ ಸ್ಪೂರ್ತಿ ಮತ್ತು ತಾಂತ್ರಿಕ ವರ್ಗಾವಣೆಗಳು ದೇಶದ ರೈತರಿಗೆ ಸಹಾಯ ಮಾಡುತ್ತದೆ.
2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಒಂದು ಸಹಾಯಕ ಹೆಜ್ಜೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಮತ್ತು ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (IFFCO) 10 ಜೂನ್ 2020 ರಂದು ICAR ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ (KVKs) ಮೂಲಕ ವಿವಿಧ ಉತ್ಪನ್ನಗಳ ಸಹಯೋಗದ ಸಂಶೋಧನೆ, ಪರೀಕ್ಷೆ ಮತ್ತು ಮೌಲ್ಯೀಕರಣಕ್ಕಾಗಿ MU ಗೆ ಸಹಿ ಮಾಡಿದೆ. ಇದು ರೈತರಿಗೆ ಅನುಕೂಲವಾಗುವಂತೆ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು, ಕ್ಷೇತ್ರ ಪ್ರಯೋಗಗಳು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ನೀಡುವ ಮೂಲಕ ತಾಂತ್ರಿಕ ಪ್ರಗತಿಯನ್ನು ಪ್ರಸಾರ ಮಾಡಲು ಈ ಕೇಂದ್ರಗಳನ್ನು ಸಕ್ರಿಯಗೊಳಿಸುತ್ತದೆ.

ಡಾ. ಎ.ಕೆ. ಸಿಂಗ್ ಡಿಡಿಜಿ ಅವರುMoU ಕುರಿತು ಸಂಕ್ಷಿಪ್ತ ಹಿನ್ನೆಲೆಯನ್ನು ನೀಡಿದರು ಮತ್ತು ಡೇರ್ ಮತ್ತು ಡಿಜಿ ಐಸಿಎಆರ್ ದ ಕಾರ್ಯದರ್ಶಿ ಡಾ. ಟಿ ಮೊಹಾಪಾತ್ರ ಅವರನ್ನು ಅಧಿವೇಶನದ ಅಧ್ಯಕ್ಷತೆಗೆ ಸ್ವಾಗತಿಸಿದರು ಮತ್ತು IFFCO ವ್ಯವಸ್ಥಾಪಕ ನಿರ್ದೇಶಕ ಡಾ. ಯು ಎಸ್ ಅವಸ್ಥಿ ಅವರನ್ನು ಸಹ-ಅಧ್ಯಕ್ಷರಾಗಿ ಆಹ್ವಾನಿಸಿದರು. ಭಾರತ ಸರಕಾರದ ಕೃಷಿಕಮಿಷನರ್ ಆದ ಮಲ್ಹೋತ್ರಾ, ಡಾ. ಕಿಮೋತಿ, ADG (Cdn.), ATARIs ನಿರ್ದೇಶಕರು; ಮತ್ತು KVK ಗಳ ಪ್ರತಿನಿಧಿಗಳನ್ನು ಕೂಡ ಅವರು ಆಹ್ವಾನಿಸಿದರು.

ಮಾರುಕಟ್ಟೆ ನಿರ್ದೇಶಕರಾದ ಶ್ರೀ ಯೋಗೇಂದ್ರ ಕುಮಾರ್ ಅವರು, ಎಂಒಯು ಅಭೂತಪೂರ್ವ ವೇಗದಲ್ಲಿ ನವೀನ ಉತ್ಪನ್ನಗಳ ಪರೀಕ್ಷೆ, ಮೌಲ್ಯೀಕರಣ ಮತ್ತು ಪ್ರಸರಣಕ್ಕೆ ಸಹಾಯ ಮಾಡುತ್ತದೆ ಮತ್ತು ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದ ಹೇಳಿದರು.. ಐಸಿಎಆರ್ ಜೊತೆ ಚರ್ಚಿಸಿದ ನಂತರ ಶೀಘ್ರದಲ್ಲೇ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದೂ ಅವರು ಹೇಳಿದರು.

DARE & DG ICAR ನ ಕಾರ್ಯದರ್ಶಿ, ಡಾ.ಟಿ.ಮಹಾಪಾತ್ರ, ಅಧಿವೇಶನದ ಅಧ್ಯಕ್ಷತೆ ವಹಿಸಿ, ಇದೊಂದು ಐತಿಹಾಸಿಕ ಘಟನೆಯಾಗಿದೆ ಎಂದು ತಿಳಿಸಿದರು. ಸಹಯೋಗದ ಸಂಶೋಧನೆ ಮತ್ತು ವಿಸ್ತರಣೆಯೊಂದಿಗೆ, ರಸಗೊಬ್ಬರದ ಬಳಕೆಯನ್ನು 15% ಕ್ಕೆ ಇಳಿಸಿದರೆ, ಅದು ಗಮನಾರ್ಹ ಕೊಡುಗೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

IFFCO ವ್ಯವಸ್ಥಾಪಕ ನಿರ್ದೇಶಕ ಡಾ. U S ಅವಸ್ತಿ ಅವರು ಕೃಷಿ ಕ್ಷೇತ್ರದಲ್ಲಿ ICAR ನ ಅದ್ಭುತ ಸಾಧನೆಗಳಿಗಾಗಿ ಶ್ಲಾಘಿಸಿದರು. ಸಂಶೋಧನೆಯು ಉದ್ಯಮದೊಂದಿಗೆ ಸಹಯೋಗವಾಗಿರಬೇಕು, ಏಕೆಂದರೆ ಇದು ಎರಡೂ ಸಂಸ್ಥೆಗಳಿಂದ ಉತ್ತಮ ಮನಸ್ಸಿನ ಕೊಡುಗೆಯೊಂದಿಗೆ ಲ್ಯಾಬ್ ಮೂಲಕ ಲ್ಯಾಬ್‌ಗೆ ತಂತ್ರಜ್ಞಾನವನ್ನು ಪ್ರಸಾರ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವಲ್ಲಿ ರೈತರಿಗೆ ಸೇವೆ ಸಲ್ಲಿಸುವುದು ಈ ಸಹಯೋಗದ ಅಂತಿಮ ಗುರಿಯಾಗಿದೆ. ಮಣ್ಣಿನ ಆರೋಗ್ಯಕ್ಕೆ ಸೂಕ್ತವಲ್ಲದ ,ಮಣ್ಣಿನಲ್ಲಿ ಅಸಮತೋಲನವನ್ನು ಉಂಟುಮಾಡುವ ರಾಸಾಯನಿಕಗಳನ್ನು ಮಣ್ಣಿನಿಂದ ಹೊರಹಾಕಲು ನಾವು ಕೆಲಸ ಮಾಡುತ್ತಿದ್ದೇವೆ, ICAR ಈ ಉದ್ಯಮಗಳಲ್ಲಿ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಈ ತಿಳಿವಳಿಕೆ ಒಪ್ಪಂದ ಸಹಕಾರಿಯಾಗಲಿದೆ ಎಂದರು.

ಎಡಿಜಿ ,ಡಾ. ರಣಧೀರ್ ಸಿಂಗ್, (Extension) ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದರು.

ಪ್ರಚಾರ ಮತ್ತು PR ಇಲಾಖೆ, ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (IFFCO), ನವದೆಹಲಿಯಿಂದ ಪ್ರಕಟಿಸಲಾಗಿದೆ.